ಮಳೆಯ ಬೆಳೆ (ಬೀದಿ ನಾಟಕದ ಹಾಡು)

ಯಾತಕೆ ಮಳೆ ವಾದವೊ
ಶಿವಶಿವನೆ
ಜೀವ ತಲ್ಲಣಿಸುತಾವೊ ||

ಮಳೆಯಿಲ್ಲ ಬೆಳೆಯಿಲ್ಲ ಶಿವನೆ
ನಮ ಬದುಕಿಗೆ ನೆಲೆಯೆಲ್ಲಿ ಶಿವನೆ ||

ದಿನವೂ ಮುಗಿಲತ್ತ ದಿಟ್ಟಿಯನಿಟ್ಟು
ಕಾಣದಾದೆವೊ ಹೊಟ್ಟೆಗೆ ಹಿಟ್ಟು
ಎತ್ತ ನೋಡಲ್ಲಿ ಬಿಸಿಲು ರಣರಣಾ
ಬರಿದಾದ ಒಡಲೆಲ್ಲ ಭಣ ಭಣಾ ||

ಮಳೆರಾಯ ನಮ್ಮ ಮರೆತಾನಲ್ಲ
ಸೂರ್ಯಪ್ಪ ನಮ್ಮ ಸುಡುತಾನಲ್ಲ
ಗಂಗಮ್ಮ ನಮ್ಮ ಕೈಬಿಟ್ಟಳಲ್ಲ
ಭೂತಾಯಿ ಮಾತ್ರ ಸಲುವ್ತಾಳಲ್ಲ ||

ಯಾತಕ್ಕೆ ಮಳೆ ವಾದವೊ
ಶಿವಶಿವನೆ
ಜೀವ ತಲ್ಲಣಿಸುತಾವೊ ||

ಹಾಡು – ೨

ಗಂಡ ಹೆಂಡಿರ ಕೆಡಿಸಿತು
ನೀರು ಕಣಣ್ಣಾ ನೀರು ||

ಅತ್ತೆ ಸೊಸೆಯ ಕೆಡಿಸಿತು
ನೀರು ಕಣಣ್ಣಾ ನೀರು ||

ತಾಯಿ ಮಗನ ಕೆಡಿಸಿತು
ನೀರು ಕಣಣ್ಣಾ ನೀರು ||

ಹಾಡು – ೩

ದೊಡ್ಡ ಮನೆಯ ದೊಡ್ಡವ್ವ
ಮನಸು ಮಾತ್ರ ಚಿಕ್ಕದವ್ವ ||

ಹಟ್ಟಿಯಿಂದ ಹನುಮಂತನ
ದೊಡ್ಡವ್ವನಲ್ಲಿಗೆ ಕರೆಸಿತು ನೀರು ||

ಒಡತಿ ಆಳಿನ ಮನಸನೆಲ್ಲ
ಕೆಡಿಸಿತು ನೀರು ||

ಹಾಡು – ೪

ಊರಿನ ಮಾನ ಎಲ್ಲೈತಣ್ಣ
ಕುಡಿಯೊ ನೀರಲ್ಲಿ ||

ಹೆಣ್ಣಿನಮಾನ ಗಂಡಿನ ಕಣ್ಣು
ಕೆರೆಯ ನೀರಿನ ಬಣ್ಣ ||

ಜೀವ ನೀರು ಮಾನ ಪ್ರಾಣ
ಊರ ಘನತೆಣ್ಣ ||

ಹಾಡು – ೫

ದೇಸಾಯಿಗೆ ಎಂಥಾ ರೋಗವಯ್ಯ
ದೊಡ್ಡರೋಗ ದೊಡ್ಡರೋಗ ||

ಯಾತರಿಂದ ಬಂದ ರೋಗ
ಸಾವಿನ ಸಿದ್ಧತೆಗೆಲ್ಲಾ ಯೋಗ ||

ಜೀವನ ಶುದ್ಧ ಇಲ್ಲದಿದ್ದರೆ
ಬರುತೈತಣ್ಣ ದೊಡ್ಡ ರೋಗ ||

ಹಾಡು – ೬

ನೀಡಿರಮ್ಮ ದಾನ ನೀರ
ಕೇಳ ಬಂದಿಹನೀ ವಜೀರ ||

ಬಾವಿ ಬತ್ತಿ ಬಾಯಿ ಬತ್ತಿ
ಜೀವ ತಲ್ಲಣಿಸೂತೈತೆ ||

ಸಾಯಲಿರುವ ಜೀವವನ್ನು
ಚೊಂಬು ನೀರಲಿ ಉಳಿಸಲಿನ್ನು ||

ಹಾಡು – ೭

ಜೀವಕ್ಕೆ ಜಲಬೇಕು
ಜಲದೊಳಗೆ ಜೀವವುಂಟು ||

ದೇಸಾಯ ಜೀವ ಎಂಬೋದು
ಊರು ನೀಡಿದ ಧರ್ಮ ||

ಮಾಡಿದ್ದ ಉಣ್ಣುತೀಯ ತಮ್ಮ
ತಿಳೀಯಿದುವೆ ಬದುಕ ಮರ್ಮ ||

ಹಾಡು – ೮

ಬಾವಿ ಬತ್ತಿದರೇನಣ್ಣಾ
ಭೂಮಿ ಬಂಜೆಯಲ್ಲ ||

ಕರೆಯ ಆಳದಿ ತೋಡಣ್ಣ
ನೀರ ನೆಲೆಯ ನೋಡಣ್ಣ ||

ಬಿದ್ದ ಮಳೆಯ ನೀರನ್ನು
ಕೆರೆಯಲಿ ತಡೆಯಣ್ಣ ||

ಹಾಡು – ೯

ನೀರಿನ ನಾಯಕನೊ
ನಮ್ಮ ವಜೀರ್‌ಸಾಬನೊ ||

ಕೆರೆ ಹೂಳೆತ್ತಿಸಿ ನೀರನಿಂಗಿಸಿ
ಬಾವಿ ಜಲವನು ಬರಿಸಿದನೊ ||

ಮಳೆಯ ಬೆಳೆಯನು ಬೆಳೆಸಿದನೊ
ಊರಿನ ಬರವಾ ಮುಗಿಸಿದನೊ ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಟ ಕುರುಡರೆಂಟು ಮಂದಿ
Next post ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys